ಜೀವನದಲ್ಲಿ ಎಲ್ಲರಿಗೂ ಒಂದು ಆಸೆ ಇದ್ದೆ ಇರುತ್ತದೆ, ಅದು ನಮ್ಮ ಬಳಿ ಒಂದು ಐಷರಾಮಿ ಕಾರು ಇರಬೇಕೆಂದು. ಮನುಷ್ಯ ಎಂದ ಮೇಲೆ ಆಸೆ ಇರುವುದು ಸಹಜ, ಆದರೆ ಅತಿಯಾದ ಆಸೆ ಹಾಗೂ ಹಠ ಇದ್ದರೆ ಜೀವನದಲ್ಲಿ ಸಾಕಷ್ಟು ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ತಂದೆ ಮಕ್ಕಳು ಚೆನ್ನಾಗಿರಲಿ ಎಂದು ಅವರು ಕೇಳಿದ್ದನ್ನು ಕೊಡಿಸುವುದರಲ್ಲಿ ಸದಾ ಮುಂದೆ ಇರುತ್ತಾರೆ. ಆದರೆ ಇಲ್ಲೋಬ್ಬ ಮಗ ತನ್ನ ತಂದೆ ಕೊಡಿಸಿದ್ದ ಕಾರನ್ನು ಹರಿಯುತ್ತಿರುವ ನೀರಿಗೆ ತಳ್ಳಿದ್ದಾನೆ.
ಮಗರಾಯ ತಂದೆ ಬಳಿ ಕಾರುಗಳ ಕಂಪನಿಯಲ್ಲಿ ಪ್ರತಿಷ್ಟಿತ ಐಷರಾಮಿ `ಜಾಗ್ವಾರ್’ ಕಂಪನಿಯ ಕಾರನ್ನು ಕೊಡಿಸಲು ಕೇಳಿದ್ದಾನೆ. ಇದಕ್ಕೆ ತಂದೆ ಮಗ ಕೇಳಿದ ಹಾಗೆ ಐಷರಾಮಿ ಕಾರನ್ನು ತಂದು ಕೊಟ್ಟಿದ್ದಾರೆ ಆದರೆ ಅದು ಜಾಗ್ವಾರ್ ಆಗಿರಲಿಲ್ಲ.! ಬದಲು ಬಿಎಂಡಬ್ಲ್ಯೂ. ಈ ಕಾರನ್ನು ತಂದುಕೊಟ್ಟ ತಂದೆಯ ವಿರುದ್ಧ ಕೋಪಗೊಂಡ ಮಗ, ಕಾರನ್ನು ಒಡಿಸಿಕೊಂಡು ಹರಿಯುತ್ತಿದ್ದ ನದಿಗೆ ದೂಡಿದ್ದಾನೆ ಬಳಿಕ ಇದರ ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾನೆ. ಈ ಘಟನೆ ಚಂಡೀಗಢ ರಾಜ್ಯದ ಯಮೂನ ನಗರದಲ್ಲಿ ನಡೆದಿದೆ.