ಹಣಕ್ಕಾಗಿ ಮಾಜಿ ಸಚಿವ ವರ್ತೂರು ಪ್ರಕಾಶ್ ಅಪಹರಣ ಪ್ರಕರಣ ಸಂಬಂಧ ಬೆಳ್ಳಂದೂರು ಪೊಲೀಸ್ ಠಾಣೆಗೆ ದೂರು ನೀಡಿದ್ದು, 3 ದಿನಗಳ ಕಾಲ ಅಜ್ಞಾತ ಸ್ಥಳದಲ್ಲಿ ಕೂಡಿಹಾಕಿ 30 ಕೋಟಿ ಡಿಮ್ಯಾಂಡ್ ಮಾಡಿ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿ ದೂರು ನೀಡಿದ್ದಾರೆ.
ದೂರು ನೀಡಿದ ಬಳಿಕ ಮಾತನಾಡಿದ ಅವರು, ಗೃಹ ಸಚಿವರಿಗೂ ನಡೆದ ಎಲ್ಲಾ ಘಟನೆ ವಿವರಿಸಿದ್ದೇನೆ. ನನಗೆ ನನ್ನ ಮಕ್ಕಳಿಗೆ ರಕ್ಷಣೆ ಬೇಕು ಅಂತ ಕೇಳಿದ್ದೇನೆ. ಕೊಡುತ್ತೇನೆ ಎಂದು ಭರವಸೆ ಕೊಟ್ಟಿದ್ದಾರೆ. ಕುಟುಂಬಕ್ಕೆ ಜೀವ ಬೆದರಿಕೆ ಇದೆ ಎಂದು ತಿಳಿಸಿದರು.
ಕಿಡ್ನ್ಯಾಪ್ ಆದ 6 ದಿನದ ಬಳಿಕ ದೂರು..?
ನ.25 ರಂದು ಸಂಜೆ 07-00 ಗಂಟೆ ಸಮಯದಲ್ಲಿ ಕೋಲಾರದ ಹೊಸಹಳ್ಳಿ ಗ್ರಾಮದ ಬಳಿ ಇರುವ ನನ್ನ ಫಾರಂ ಹೌಸ್ನಿಂದ ನಾನು ನನ್ನ ಚಾಲಕನಾದ ಸುನೀಲ್ ರವರ ಜೊತೆ ಕೋಲಾರ ನಗರಕ್ಕೆ ಬರಲು, ನನ್ನ ಫಾರ್ಚೂನರ್ ವಾಹನ ಸಂಖ್ಯೆ ಕೆಎ-05-ಎಂ.ವಿ-8775 ರಲ್ಲಿ ಬರುತ್ತಿರಬೇಕಾದರೆ, ಫಾರಂ ಹೌಸ್ನಿಂದ ಒಂದು ಕಿಲೋಮೀಟರ್ ದೂರ ಬಂದ ನಂತರ ಯಾರೋ ಕೆಲ ಅಪರಿಚಿತ ವ್ಯಕ್ತಿಗಳು ಏಕಾಏಕಿ ನನ್ನ ಕಾರನ್ನು ತಡೆಗಟ್ಟಿದ್ದಾರೆ. ಸುಮಾರು 8 ಜನರು ಬಂದು ನನ್ನ ಕಾರಿನ ಗ್ಲಾಸ್ ಗಳನ್ನು ಒಡೆದುಹಾಕಿ ಲಾಂಗ್ ಹಿಡಿದು ನನ್ನನ್ನು ಇಳಿ ಇಳಿ ಎಂದರು. ನಾನು ಇಳಿಯೋಕೆ ಹೋಗಿಲ್ಲ. ನನ್ನ ಕಾರಿನಲ್ಲೇ ನನ್ನನ್ನು ಒಳಗೆ ಹಾಕೊಂಡು ಮಂಕಿ ಕ್ಯಾಪ್ ಹಾಕಿದ್ರು. ನಮ್ಮ ಡ್ರೈವರ್ ಓಡಲು ಹೋದ ಮೊಚ್ಚಲ್ಲಿ ಕೈಗೆ ಏಟಿ ಹಾಕಿದರು ಅವ್ನಿಗೆ. ಅವನನ್ನೂ ಎತ್ತಿ ನನ್ನ ಕಾರಿನ ಒಳಗೆ ಹಾಕಿದರು. ಇಬ್ಬರನ್ನೂ ಕೂಡಿ ಹಾಕಿದರು. 4 ಗಂಟೆ ನಾವು ಕಾರ್ ನಲ್ಲೇ ಇದ್ವಿ. ನಾಲ್ಕು ಗಂಟೆ ಕಾರ್ ನಲ್ಲೇ ಹರಾಸ್ ಮಾಡಿದ್ರು ನನ್ನ. ತಲೆಗೆ ರಾಡ್ ನಲ್ಲಿ ಒಡೆಯೋದು. ಗನ್ ತೋರಿಸೋದು. 30 ಕೋಟಿ ಕೊಟ್ರೆ ನಿನ್ನನ್ನು ಬಿಡ್ತೀವಿ ಇಲ್ಲಾಂದ್ರೆ ಇಲ್ಲ. ಕಡೆಗೆ 11 ಗಂಟೆಗೆ ಜನ ಇಲ್ಲ. ಬರೀ ಮರಗಳು ಇರೋ ಜಾಗಕ್ಕೆ ಕರೆದುಕೊಂಡು ಹೋದರು. ಕಾಡಿಗೆ ಕರೆದುಕೊಂಡು ಹೋದರು ಅನಿಸುತ್ತೆ. ಅಲ್ಲಿ ಹೋದ ನಂತರ ನನ್ನ ಕಾಲು ಕೈ ಎರಡೂ ಕಟ್ಟಿ ಹಾಕಿ. ಬೆಳಗ್ಗಿನ ಜಾವ 3 ಗಂಟೆವರೆಗೂ ಹೊಡೆದರು. ಹಣ ಎಲ್ಲಿದೆ. ಒಡವೆ ಎಲ್ಲಿಟ್ಟಿದ್ದೀಯಾ ಹೇಳು ಎಂದು ಹೊಡೆದರು. ನನ್ನ ಬಳಿ ಹಣ ಇಲ್ಲ ಎಂದು ಎಷ್ಟು ಹೇಳಿದರೂ ಅವರು ಕೇಳಲಿಲ್ಲ. ನಿನ್ನ ಸ್ನೇಹಿತರಿಗೆ ಹೇಳು ಎಂಎಲ್ ಎ ಗಳಿಗೆ ಹೇಳು. ಮಿನಿಸ್ಟರ್ ಗೆ ಯಾರಿಗಾದರೂ ಹೇಳಿ ತರಿಸು ಎಂದರು. 3.30 ಕ್ಕೆ ಅವರೆಲ್ಲಾ ಮಲಗಿಬಿಟ್ಟರು. ಮತ್ತೇ 6.30 ಕ್ಕೆ ಎದ್ದು ಅದನ್ನೇ ಪ್ರಾರಂಭ ಮಾಡಿದರು. ನನ್ನನ್ನ ಆ ಜಾಗದಿಂದ ಮತ್ತೇ ಇನ್ನೊಂದು ಜಾಗಕ್ಕೆ ಕರೆದುಕೊಂಡು ಹೋದರು. ನಾಲ್ಕು ತಾಸು. ಅಂದ್ರೆ 10 ರಿಂದ 12 ಗಂಟೆ ವರೆಗೆ ಬೇರೆ ಕಡೆ ಕರೆದುಕೊಂಡು ಹೋದರು ಎಂದು ವಿವರಿಸಿದ್ದಾರೆ.
ನ.26ರಂದು ಅಪಹರಣಕಾರರ ಹಿಂಸೆ ತಾಳಲಾರದೇ, ನಯಾಜ್ ಅನ್ನೋ ಹುಡುಗನ ಮೂಲಕ ಕೊಲಾರದ ಕಾಫಿ ಡೇ ಶಾಪ್ ಬಳಿ 48 ಲಕ್ಷ ರೂ. ತರಿಸಿಕೊಂಡು ಹಣವನ್ನು ಅಪಹರಣಕಾರರಿಗೆ ಕೊಟ್ಟಿದ್ದೇನೆ. ಹಣ ನೀಡದಿದ್ದರೂ ಪರಿಪರಿಯಾಗಿ ಚಿತ್ರ ಹಿಂಸೆ ನೀಡಿ ಹೆಚ್ಚಿನ ಹಣಕ್ಕಾಗಿ ಪ್ರತಿಕ್ಷಣ ಪೀಡಿಸಿ ಹಿಂಸೆ ಮಾಡಿ ಮತ್ತೆ ಹಣವನ್ನು ನೀಡುವಂತೆ ಒತ್ತಾಯಿಸಿದ್ದಾರೆ. ನ.28 ಮುಂಜಾನೆವರೆಗೂ ಅಪಕಾರರ ಕಪಿಮುಷ್ಠಿಯಲ್ಲಿದ್ದೇನೆ.. ನನಗೆ ಹಣ ನೀಡಲು ಸಾಧ್ಯವಾಗದೇ ಇದ್ದಾಗ, ನನ್ನ ಚಾಲಕನಿಗೆ ಚಿತ್ರಹಿಂಸೆ ನೀಡಿ ರಾಡ್ ಮತ್ತು ಮಚ್ಚಿನಿಂದ ತಲೆಗೆ ಹೊಡೆದಿದ್ದರಿಂದ ಮೂರ್ಚೆ ತಪ್ಪಿ ಬಿದ್ದಿದ್ದಾರೆ. ಚಾಲಕ ಮೃತಪಟ್ಟಿದ್ದಾನೆಂದು ಭಾವಿಸಿ ಸ್ವಲ್ಪ ದೂರದಲ್ಲಿ ತಿಳಿದು ಸ್ವಲ್ಪ ದೂರದಲ್ಲಿ ಡ್ರಿಂಕ್ಸ್ ಮಾಡುತ್ತಿರುವಾಗ ನನ್ನ ಚಾಲಕ ಜ್ಞಾನ ಬಂದು ಆ ಸ್ಥಳದಿಂದ ಪರಾರಿಯಾಗಿದ್ದ.
ಇದನ್ನ ಅರಿತ ಅಪರಿಚಿತರು ಚಾಲಕನು ಪೊಲೀಸರಿಗೆ ಮಾಹಿತಿ ನೀಡಬಹುದಂದು ಭಯಗೊಂಡು ನನ್ನನ್ನು ಹೊಸಕೋಟೆ ಬಳಿ ಇರುವ ಶಿವನಾಪುರ ಗ್ರಾಮದ ಬಳಿ ಇರುವ ಖಾಲಿ ಮೈದಾನದಲ್ಲಿ ಬೆಳಗಿನ ಜಾವ ಸುಮಾರು 4 ಗಂಟೆ ಕಾರಿನಿಂದ ತಳ್ಳಿ ಹೋದರು ಎಂದು ಘಟನೆ ಕುರಿತು ವಿವರಿಸಿದರು.