ಶ್ರೀ ಶಾರ್ವರಿ ನಾಮ ಸಂವತ್ಸರೆ, ದಕ್ಷಿಣಾಯಣೆ, ಹೇಮಂತ ಋತು, ಮಾರ್ಗಶಿರ ಮಾಸೆ, ಶುಕ್ಲ ಪಕ್ಷದ ಚತುರ್ಥಿ ತಿಥಿ, ಶ್ರವಣಾ ನಕ್ಷತ್ರ, ವ್ಯಾಘಟ ಯೋಗ , ಭದ್ರಂಕ್ ಕರಣ, ಡಿಸೆಂಬರ್ 18 , ಶುಕ್ರವಾರದ ಪಂಚಾಂಗ ಫಲವನ್ನು ಶ್ರೀ ರವಿಶಂಕರ್ ಗುರೂಜಿ ಅವರು ನೀಡಿದ್ದಾರೆ. ಇಂದು ಅಮೃತ ಕಾಲ ಬೆಳಿಗ್ಗೆ 8ಗಂಟೆ 44 ನಿಮಿಷದಿಂದ 10ಗಂಟೆ 19ನಿಮಿಷದ ವರೆಗೆ ಇದೆ.
ಈ 1ಕಷ್ಟಕರವಾದ ಸಂಸ್ಕಾರವನ್ನು ಅಥವಾ ಅನುಷ್ಠಾನವನ್ನು ಮಕ್ಕಳಿಗೆ ಅದರಲ್ಲೂ ಪುಟ್ಟ ತುಂಟ ಮಕ್ಕಳಿಗೆ ಮಾಡಿಸಿದರೆ ಅದ್ಭುತವಾದ ಶಕ್ತಿಯನ್ನು ಪಡೆದುಕೊಳ್ಳುತ್ತಾರೆ. ಯಾವುದೇ ಕಾರಣಕ್ಕೂ ನಿಮ್ಮ ಮಕ್ಕಳನ್ನು ಬೇರೆ ಮಕ್ಕಳಿಗೆ ಕಂಪೇರ್ ಮಾಡಲು ಹೋಗಬೇಡಿ. ನಮ್ಮ ಮಾತು ಕೇಳುತ್ತಿಲ್ಲ ಕಾನ್ಸಂಟ್ರೇಶನ್ ಇಲ್ಲ ಈ ರೀತಿ ಸಮಸ್ಯೆ ಇರುವವರು 16ಇಲ್ಲವೆ 21ಸಂಕಷ್ಟ ಚತುರ್ಥಿಗಳನ್ನು ಪೂಜೆ ಮಾಡಿ ಆ ನಂತರ ಗುರುವಾರದಂದು ಸಂಕಷ್ಟ ಚತುರ್ಥಿಯ ದಿನ 2ಮೂಗನ್ನು ಚುಚ್ಚಿಸಿ ನಂತರ ಅದು ಮುಚ್ಚಿಕೊಂಡು ಬಿಡುತ್ತದೆ. ಈ ಅದ್ಭುತವಾದ ಫಲಿತಾಂಶ ದೊರೆಯುತ್ತದೆ. ಕಾನ್ಸೆಂಟ್ರೇಷನ್ ಕೂಡ ಬರುತ್ತದೆ. ಅಜ್ಞಾ ಶಕ್ತಿ ಜಾಗ್ರತಗೊಳ್ಳುತ್ತದೆ.
ಚತುರ್ಥಿಯ ದಿನದಂದು ಹುಟ್ಟಿದವರು ಬಳಿ ರಹಸ್ಯಗಳು ಹೆಚ್ಚು ಇರುತ್ತವೆ. 1ಮಾತನ್ನು ಹೊರಗಡೆ ನೀವು ಮಾತನಾಡಿದರೆ ನೂರು ಮಾತುಗಳು ನಿಮ್ಮ ಮನಸಿನಲ್ಲಿ ಉಳಿದಿರುತ್ತವೆ.
ನಿಮ್ಮ ರಾಶಿ ಫಲದ ಬಗ್ಗೆ ಮಾಹಿತಿ ಹೀಗಿದೆ :
ಮೇಷರಾಶಿ : ಚೆನ್ನಾಗಿದೆ ಹಣ್ಣು ಹಾಲು ಪೂಜಾ ಸಾಮಗ್ರಿಗಳು ಗ್ರಂಥಿಕೆ ಅಂಗಡಿ ಆಚಾರ್ಯ ವಿಶ್ವಕರ್ಮ ಈ ರೀತಿ ಕೆಲಸ ಕಾರ್ಯಗಳಲ್ಲಿ ತೊಡಗಿರುವವರಿಗೆ ಅನುಕೂಲಕರ.
ವೃಷಭ ರಾಶಿ : ಆಮದು ರಫ್ತು ದೂರದ ಕೆಲಸ, ದೂರದ ವ್ಯವಹಾರಗಳು, ದೂರದ ವಿದ್ಯೆ, ದೂರದ ಪ್ರಯಾಣ ಎಲ್ಲಾ ಸ್ವಲ್ಪ ಪ್ರಯಾಸಕರ. ಎಸ್ ಶ್ರೀನಿವಾಸ ದೇವರ ಸೇವೆಯನ್ನು ಮಾಡಿ ಮತ್ತು ವಿಷ್ಣು ಸಹಸ್ರನಾಮವನ್ನು ಕೇಳಿ ಒಳ್ಳೆಯದಾಗುತ್ತದೆ.
ಮಿಥುನ ರಾಶಿ : ದುಡಿಯಲು ಓಡಬೇಕಾಗುತ್ತದೆ, ದಣಿಯುತ್ತೀರಿ, ಆರೋಗ್ಯದ ಕಡೆ ಗಮನ ಕೊಡಿ.
ಕರ್ಕಾಟಕ ರಾಶಿ : ಚೆನ್ನಾಗಿದೆ ಜನಸೇವೆ ಜನಾನುರಾಗಿ ವೃದ್ಧಾಶ್ರಮ ಅನಾಥಾಶ್ರಮ ದೇವ ಕಾರ್ಯ ಜನಪರ ಕಾರ್ಯಗಳಲ್ಲಿ ತೊಡಗಿರುವವರಿಗೆ ಅದ್ಭುತವಾದ ಪ್ರಗತಿ.
ಸಿಂಹ ರಾಶಿ : ರಾಜಕೀಯದ ಚಿಂತೆ ಇದ್ದರೆ ಸೂರ್ಯ ನೀಚನಾಗಿರುವುದರಿಂದ ಸ್ವಲ್ಪ ನಿಧಾನಿಸುವುದು ಒಳ್ಳೆಯದು. ಸಾರ್ವಜನಿಕ ಅವಮಾನಗಳು ಆಗುತ್ತದೆ ಜೊತೆಗೆ ದುಡ್ಡನ್ನು ಕೂಡ ಕಳೆದುಕೊಳ್ಳುತ್ತಿರುವ ಎಚ್ಚರಿಕೆ.
ಕನ್ಯಾ ರಾಶಿ : ಚೆನ್ನಾಗಿದೆ, ತೊಂದರೆಯೆನಿಲ್ಲ, ತೃಪ್ತಿದಾಯಕ ,ಒಳ್ಳೆಯ ಭೋಜನ ,ಸುತ್ತಾಟ, ಪ್ರಯಾಣ ,ಎಲ್ಲವನ್ನು ನೋಡುವಂತಹ ದಿನ.
ತುಲಾ ರಾಶಿ : ಚೆನ್ನಾಗಿದೆ ವೃತ್ತಿಪರವಾಗಿ ಶುಭ ಸುದ್ದಿಯೊಂದನ್ನು ಪಡೆಯುತ್ತೀರಿ.
ವೃಶ್ಚಿಕ ರಾಶಿ : ಭಾಗ್ಯೋದಯ ಮಾಡುವ ಕೆಲಸ ಕಾರ್ಯಗಳಲ್ಲಿ ವಿಶೇಷ ಅಭಿವೃದ್ಧಿ.
ಧನಸ್ಸು ರಾಶಿ : ಕುಟುಂಬದಲ್ಲೊಂದು ಅಸಮಾಧಾನ, ಹತ್ತಿರದವರಿಂದ ನೋವು, ಇಲ್ಲವೆ ಆರೋಗ್ಯಕ್ಕೆ ತೊಂದರೆ ಮಾಡಿಕೊಳ್ಳುತ್ತೀರಾ.
ಮಕರ ರಾಶಿ : ಅಂದುಕೊಂಡದ್ದಕ್ಕಿಂತ ಹೆಚ್ಚಾಗಿ ನಿಮ್ಮ ಕೆಲಸ ಕಾರ್ಯಗಳಿಗೆ ಸಹಾಯ ಒದಗಿ ಬರುತ್ತದೆ.
ಕುಂಭ ರಾಶಿ : ಪ್ರಯಾಣದಲ್ಲಿ ಎಚ್ಚರಿಕೆ ಬೇಗ ಥಂಡಿಯಾಗುತ್ತದೆ.
ಮೀನ ರಾಶಿ : ಮಕ್ಕಳಿಂದ ಮನೆಯವರಿಂದ ವಿಶೇಷ ಲಾಭ. ಇಷ್ಟು ದಿನ ಪಟ್ಟಂತಹ ಕಷ್ಟಕ್ಕೆ ಸೌಭಾಗ್ಯ ಯೋಗವಿದೆ, ಛತ್ರ ಚಾಮರಗಳಿಂದ ಪೂಜಿಸಲ್ಪಡುವಿರಿ.
All Rights reserved Namma Kannada Entertainment.