೧.ಬಾಣಂತಿಯರು ಪ್ರತಿದಿನ ಒಂದು ಲೋಟದಷ್ಟು ಕಬ್ಬಿನ ಹಾಲು ಸೇವಿಸಿದರೆ ಎದೆಹಾಲು ಹೆಚ್ಚುತ್ತದೆ.
೨.ಜೀರ್ಣಶಕ್ತಿ ಕಡಿಮೆಯಾಗಿದ್ದರೆ ಕಬ್ಬಿನ ರಸವನ್ನು ಕುದಿಸಿ ಬಳಿಕ ಅದನ್ನು ನಿತ್ಯ ಸೇವನೆ ಮಾಡಿದರೆ ಜೀರ್ಣಶಕ್ತಿ ಸುಗಮಗೊಳ್ಳುತ್ತದೆ.
೩.ದೇಹದಲ್ಲಿ ವಾಂತಿ ಸಮಸ್ಯೆ ಹೆಚ್ಚು ಕಾಡುತ್ತಿದ್ದರೆ. ಕಬ್ಬಿನ ರಸಕ್ಕೆ ನಿಂಬೆರಸ ಬೆರೆಸಿ ಸೇವಿಸಿದರೆ ವಾಂತಿ ನಿಯಂತ್ರಣಗೊಳ್ಳುತ್ತದೆ.
೪.ಮೂತ್ರದಲ್ಲಿ ಹೆಚ್ಚು ಉರಿ ಸಮಸ್ಯೆ ಕಾಡುತ್ತಿದ್ದರೆ ಅಥವಾ ಕಲ್ಲಿದ್ದರೆ ಪ್ರತಿನಿತ್ಯ ಒಂದು ಲೋಟ ಕಬ್ಬಿನ ರಸ ಸೇವಿಸುವುದು ಉತ್ತಮ.
೫.ಒಣ ಕೆಮ್ಮಿದ್ದರೆ ಪ್ರತಿನಿತ್ಯ ಎರಡು ಬಾರಿ ಕಬ್ಬಿನ ರಸ ಸೇವನೆ ಮಾಡುವುದರಿಂದ ಒಣಕೆಮ್ಮು ಕೂಡಲೇ ಶಮನವಾಗಲಿದೆ.